ನನ್ನ ಎಚ್ಚರಿಕೆಯನ್ನು ಆರ್ಬಿಐ ದೃಢಪಡಿಸಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ, ಆ. 26: ಕೇಂದ್ರ ಸರಕಾರದ ವಿರುದ್ಧದ ತನ್ನ ವಾಗ್ದಾಳಿಯನ್ನು ಬುಧವಾರವೂ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ನಾನು ಹಲವು ತಿಂಗಳುಗಳಿಂದ ನೀಡುತ್ತಿದ್ದ ಎಚ್ಚರಿಕೆಯನ್ನು ಆರ್ಬಿಐ ಈಗ ದೃಢಪಡಿಸಿದೆ” ಎಂದಿದ್ದಾರೆ.
ಮಾಧ್ಯಮದ ಮೂಲಕ ಗಮನ ಬೇರೆಡೆ ಸೆಳೆಯುವುದರಿಂದ ಬಡವರಿಗೆ ಯಾವುದೇ ಪ್ರಯೋಜನ ಉಂಟಾಗದು ಎಂದು ಅವರು ಆರ್ಬಿಐ ವರದಿಯನ್ನು ಆಧರಿಸಿದ ಸುದ್ದಿಯೊಂದಿಗೆ ಈ ಟ್ವೀಟ್ ಮಾಡಿದ್ದಾರೆ. ತನ್ನ ಟ್ವೀಟ್ನಲ್ಲಿ ಅವರು ಕೆಲವು ಸಲಹೆಗಳನ್ನು ಕೂಡ ನೀಡಿದ್ದಾರೆ.
ಸರಕಾರ ಹೆಚ್ಚು ಸಾಲ ನೀಡುವ ಬದಲು ಹೆಚ್ಚು ವೆಚ್ಚ ಮಾಡುವ ಅಗತ್ಯ ಇದೆ. ಬಡವರಿಗೆ ಹಣ ನೀಡಿ. ಕೈಗಾರಿಕೋದ್ಯಮಿಗಳ ತೆರಿಗೆ ಕಡಿತ ಮಾಡಬೇಡಿ. ಅನುಭೋಗದ ಮೂಲಕ ಆರ್ಥಿಕತೆಯನ್ನು ಮರು ಆರಂಭಿಸಿ ಎಂದು ಅವರು ಹೇಳಿದ್ದಾರೆ. ಮಾಧ್ಯಮದ ಮೂಲಕ ಗಮನ ಬೇರೆಡೆಗೆ ಸೆಳೆಯುವುದರಿಂದ ಆರ್ಥಿಕತೆಯ ವಿಪತ್ತನ್ನು ಕಣ್ಮರೆ ಮಾಡಲು ಕೂಡಾ ಸಾಧ್ಯವಾಗದು ಎಂದು ರಾಹುಲ್ ಗಾಂಧಿ ಹೇಳಿದರು.
Next Story