ರಾಜ್ಯಸಭಾ ಸದಸ್ಯರಾಗಿ ದೇವೇಗೌಡರಿಂದ ಪ್ರಮಾಣವಚನ ಸ್ವೀಕಾರ
ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನಸೆಳೆದ ಮಾಜಿ ಪ್ರಧಾನಿ
ಹೊಸದಿಲ್ಲಿ,ಸೆ.20: ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ರವಿವಾರ ರಾಜ್ಯಸಭೆಯ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನಸೆಳೆದರು. ಗೌಡರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ದೇಶದಲ್ಲಿ ಹಿಂದಿ ಹೇರಿಕೆಯ ಗದ್ದಲದ ನಡುವೆ ದೇವೇಗೌಡರು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿರುವುದು ಮಹತ್ವ ಪಡೆದಿದೆ.1996ರ ನಂತರ ಇದೇ ಮೊದಲ ಬಾರಿ ಜೆಡಿಎಸ್ ನಾಯಕರೊಬ್ಬರು ಮೇಲ್ಮನೆಗೆ ಸದಸ್ಯರಾಗಿ ಪ್ರವೇಶಿಸಿದಂತಾಗಿದೆ.
ರಾಜ್ಯಸಭೆಗೆ ಒಳ್ಳೆಯ ಸೇರ್ಪಡೆ ಎಂದು ರಾಜ್ಯಸಭೆ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಬಣ್ಣಿಸಿದ್ದಾರೆ.
ಮಾಜಿ ಪ್ರಧಾನಿ ಹಾಗೂ ದೇಶದ ಅತ್ಯಂತ ಹಿರಿಯ ನಾಯಕರೊಬ್ಬರು ಸದನವನ್ನು ಪ್ರವೇಶಿಸಿದ್ದಾರೆ ಎಂದು ನಾಯ್ಡು ಹೇಳಿದ್ದಾರೆ.
Next Story