ಪೂಂಛ್ನಲ್ಲಿ ಯೋಧನ ಶಂಕಾಸ್ಪದ ಸಾವು
ಪೂಂಛ್(ಜಮ್ಮು),ಮಾ.9: ಗುಂಡೇಟುಗಳಿಂದ ಕೂಡಿದ್ದ ಯೋಧನೋರ್ವನ ಮೃತದೇಹವು ಗುರುವಾರ ಜಿಲ್ಲೆಯ ಸುರಾನಕೋಟ್ ತಲೂಕಿನ ದ್ರಾಬಾ ಪ್ರದೇಶದಲ್ಲಿ ಪತ್ತೆಯಾಗಿದ್ದು, ಶಂಕಾಸ್ಪದ ಸ್ಥಿತಿಯಲ್ಲಿ ಈ ಸಾವು ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದು ಕಳೆದ 13 ದಿನಗಳಲ್ಲಿ ಯೋಧನೋರ್ವ ಗುಂಡೇಟಿನಿಂದ ಸಾವನ್ನಪ್ಪಿದ ಮೂರನೇ ಘಟನೆಯಾಗಿದೆ.ಮೊದಲಿನ ಎರಡು ಘಟನೆಗಳು ಆತ್ಮಹತ್ಯೆಗಳಾಗಿದ್ದವು ಎಂದು ಅವರು ತಿಳಿಸಿದರು.
ಮೃತ ಯೋಧನನ್ನು ರಾಷ್ಟ್ರೀಯ ರೈಫಲ್ಸ್ನ ಸಿಪಾಯಿ ಬಲರಾಜ್ ಸಿಂಗ್ ಎಂದು ಗುರುತಿಸಲಾಗಿದೆ. ದೇಹದಲ್ಲಿ ಹಲವಾರು ಗುಂಡಿನ ಗಾಯಗಳಿದ್ದು, ತನಿಖೆ ಮುಂದುವರಿದಿದೆ ಎಂದು ಸುರಾನಕೋಟ್ ಎಸ್ಡಿಪಿಒ ಅಸ್ಘರ್ ಅಲಿ ಮಲಿಕ್ ತಿಳಿಸಿದರು.
ಮಾ.5ರಂದು ಯೋಧ ರೋಷನ್ ಸಿಂಗ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಕರ್ತವ್ಯದಲ್ಲಿದ್ದಾಗ ತನ್ನ ಸರ್ವಿಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಫೆ.25ರಂದು ಇದೇ ರೀತಿ ಕರ್ತವ್ಯನಿರತನಾಗಿದ್ದ ಬಿಎಸ್ಎಫ್ ಕಾನ್ಸ್ಟೇಬಲ್ ಪ್ರಮೋದ್ ಕುಮಾರ್ ಕೂಡ ತನ್ನ ಸರ್ವಿಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.