ನ್ಯಾಯ ದೊರೆಯದಿದ್ದರೆ ಆತ್ಮಹತ್ಯೆ : ಪಹ್ಲು ಖಾನ್ ಕುಟುಂಬದ ಬೆದರಿಕೆ
ಜೈಪುರ,ಎ.17: ಸರಕಾರವು ತಮಗೆ ನ್ಯಾಯ ಒದಗಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೋರಕ್ಷಕರ ಗುಂಪಿನಿಂದ ಕೊಲೆಯಾಗಿರುವ ಹರ್ಯಾಣದ ಹೈನುಗಾರ ಪಹ್ಲು ಖಾನ್ ಅವರ ಕುಟುಂಬವು ಬೆದರಿಕೆಯೊಡ್ಡಿದೆ.
ನಗರದ ಶಹೀದ್ ಸ್ಮಾರಕ ಪಾರ್ಕ್ನಲ್ಲಿ ಸಿಪಿಎಂ ಏರ್ಪಡಿಸಿದ್ದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಪಹ್ಲು ಖಾನ್ರ ಚಿಕ್ಕಪ್ಪ ಹುಸೇನ್ ಖಾನ್ ಅವರು ಈ ಬೆದರಿಕೆಯನ್ನು ಒಡ್ಡಿದರು.
ಎ.1ರಂದು ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಣಿಕೆಯ ಅರೋಪದಲ್ಲಿ ಪಹ್ಲು ಖಾನ್(50) ಮತ್ತು ಇತರರ ಮೇಲೆ ಗೋರಕ್ಷಕರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಪಹ್ಲು ಖಾನ್ ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಇಬ್ಬರು ಪುತ್ರರು ಮತ್ತು ನೆರೆಮನೆಯ ನಿವಾಸಿ ಗಾಯಗೊಂಡು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.
Next Story