ದಿಲ್ಲಿ ನ್ಯಾಯಾಲಯದ ಹೊರಗೆ ವಿಚಾರಣಾಧೀನ ಕೈದಿಗೆ ಗುಂಡಿಕ್ಕಿ ಹತ್ಯೆ
ಹೊಸದಿಲ್ಲಿ,ಎ.29: ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ಕೈದಿಯನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಇಂದು ಇಲ್ಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯದ ಹೊರಗೆ ಸಂಭವಿಸಿದೆ.ರಾಜೇಶ್ ಕೊಲೆಯಾಗಿರುವ ವಿಚಾರಣಾಧೀನ ಕೈದಿ. ನಗರದ ಭವಾನಾ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದ ರಾಜೇಶನನ್ನು ಹರ್ಯಾಣ ಪೊಲಿಸರು 2016, ಡಿಸೆಂಬರ್ನಲ್ಲಿ ಕೊಲೆ ಪ್ರಕರಣದಲ್ಲಿ ಬಂಧಿಸಿದ್ದರು.
ಬಂಧನವಾದಾಗಿನಿಂದಲೂ ಹರ್ಯಾಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ರಾಜೇಶ ನನ್ನು ಅಲ್ಲಿಯ ಪೊಲೀಸರು ಶನಿವಾರ ಬೆಳಿಗ್ಗೆ ರೋಹಿಣಿ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರು ಪಡಿಸಲು ಕರೆ ತಂದಿದ್ದರು. ಈ ವೇಳೆ ಹರ್ಯಾಣದ ಝಜ್ಜರ್ ಜಿಲ್ಲೆಯ ನಿವಾಸಿ ಮೋಹಿತ್ ಎಂಬಾತ ಪಿಸ್ತೂಲಿನಿಂದ ಗುಂಡು ಹಾರಿಸಿ ರಾಜೇಶನ ಕೊಲೆ ಮಾಡಿದ್ದಾನೆ.ರೋಹಿಣಿ ಪೊಲೀಸರು ಮೋಹಿತ್ನನ್ನು ಬಂಧಿಸಿದ್ದಾರೆ. ಈ ಕೊಲೆಗೆ ಕಾರಣವಿನ್ನಷ್ಟೇ ಗೊತ್ತಾಗಬೇಕಾಗಿದೆ.
Next Story