ರಾಜ್ಯಪಾಲರ ಆಡಳಿತ ಜಾರಿಯಾದರೆ ಕಾಶ್ಮೀರ ಉಳಿದೀತು: ಫಾರುಕ್ ಅಬ್ದುಲ್ಲ
ಶ್ರೀನಗರ, ಮೇ 28: ಕಾಶ್ಮೀರವನ್ನು ರಕ್ಷಿಸಿಕೊಳ್ಳಬೇಕಿದ್ದರೆ ತಕ್ಷಣ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೊಳಿಸಬೇಕು ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲ ಕರೆ ನೀಡಿದ್ದಾರೆ.
ರಾಜ್ಯಪಾಲರ ಆಡಳಿತವನ್ನು ತಾವು ಯಾವತ್ತೂ ಬೆಂಬಲಿಸಿಲ್ಲ. ಆದರೆ ಈಗ ಬೇರೆ ದಾರಿಯಿಲ್ಲ ಎಂದ ಅವರು, ಮೆಹಬೂಬ ಮುಫ್ತಿ ಸರಕಾರ ಎಲ್ಲಾ ಕ್ಷೇತ್ರದಲ್ಲೂ ವಿಫಲವಾಗಿದೆ . ಇಡೀ ಕಾಶ್ಮೀರ ಕಣಿವೆಯಲ್ಲಿ ದುರಂತ ತಾಂಡವವಾಡುತ್ತಿದ್ದು ಇದು ದೇಶದ ಇತರೆಡೆ ಕೋಮು ಪ್ರಕ್ಷುಬ್ಧತೆಗೆ ಕಾರಣವಾಗುತ್ತಿದೆ. ಆದ್ದರಿಂದ ಈ ಸಮಸ್ಯೆಗೆ ಶೀಘ್ರ ಪರಿಹಾರ ರೂಪಿಸಬೇಕಿದೆ ಎಂದವರು ಸುದ್ದಿಗಾರರ ಜೊತೆ ಮಾತನಾಡುತ್ತಾ ತಿಳಿಸಿದರು.
ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಪ್ರಧಾನಿಯ ಆಹ್ವಾನದ ಮೇರೆಗೆ ಅವರನ್ನು ಭೇಟಿಯಾಗಿದ್ದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಶ್ಮೀರದ ಸಮಸ್ಯೆಗೆ ಶಾಂತಿಯುತ ಪರಿಹಾರ ಹುಡುಕುವ ಬಗ್ಗೆ ಮಾತುಕತೆ ನಡೆಯಿತು ಎಂದು ತಿಳಿಸಿದರು.
Next Story