ಕಟ್ಟಡ ಕಾಮಗಾರಿ ವೇಳೆ ಭೂಕುಸಿತ: ನಾಲ್ವರು ಮೃತ್ಯು
ತಿರುನಂತಪುರಂ, ಜೂ.5: ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಭೂಕುಸಿತಗೊಂಡು ನಾಲ್ವರು ಕಾರ್ಮಿಕರು ಮೃತಪಟ್ಟ ಘಟನೆ ತಿರುವನಂತಪುರದ ಪಂಗಪ್ಪರ ಎಂಬಲ್ಲಿ ಸಂಭವಿಸಿದೆ.
ಕೇರಳ ಲ್ಯಾಂಡ್ ರಿಫಾರ್ಮ್ಸ್ ಕೊ-ಆಪರೇಟಿವ್ ಸೊಸೈಟಿಯಡಿ ನಿರ್ಮಾಣವಾಗುತ್ತಿರುವ ಫ್ಯ್ಲಾಟ್ ನ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
ಮೃತಪಟ್ಟವರನ್ನು ಬಂಗಾಳದ ಜಾನ್ ಹಾಗೂ ಸಪಾನ್ ಮತ್ತು ಬಿಹಾರದ ಬರ್ನದ್ ಬರ್ಮಾನ್ ಎಂದು ಗುರುತಿಸಲಾಗಿದ್ದು, ಕೇರಳದ ಉನ್ನಿಕೃಷ್ಣನ್ ಎಂಬವರೂ ಮೃತಪಟ್ಟಿದ್ದಾರೆ.
ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಒಟ್ಟು 6 ಮಂದಿ ಕಾರ್ಮಿಕರಿದ್ದರು ಎನ್ನಲಾಗಿದೆ.
Next Story