ಪತ್ನಿಯನ್ನು ಕೊಂದು ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾದ
ಲಖಿಂಪುರ ಖೇರಿ(ಉ.ಪ್ರ),ಜೂ.12:ತನ್ನ ಪತ್ನಿಯೊಡನೆ ಜಗಳವಾಡಿದ ವ್ಯಕ್ತಿ ಸಿಟ್ಟಿನ ಭರದಲ್ಲಿ ಆಕೆಯನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ರುಂಡದೊಡನೆ ಪೊಲೀಸ್ ಚೌಕಿಗೆ ತೆರಳಿ ಶರಣಾದ ಆಘಾತಕಾರಿ ಘಟನೆ ಸೋಮವಾರ ಬೆಳಿಗ್ಗೆ ಲಖಿಂಪುರ ಖೇರಿ ಜಿಲ್ಲೆಯ ಬೆಹಜಾಮ್ನಲ್ಲಿ ನಡೆದಿದೆ.
ಬೆಹಜಾಮ್ ನಿವಾಸಿಗಳಾದ ರಾಮಸೇವಕ್(52) ಮತ್ತು ಆತನ ಪತ್ನಿ ಉಷಾ ದೇವಿ(50) ಅವರು ಬೆಳಿಗ್ಗೆ ತಮ್ಮ ಹೊಲಕ್ಕೆ ತೆರಳಿದ್ದರು. ಈ ವೇಳೆ ಅವರ ನಡುವೆ ಕೌಟುಂಬಿಕ ಕಾರಣಕ್ಕೆ ಜಗಳವಾಗಿದ್ದು, ಸಿಟ್ಟಿನ ಕೈಗೆ ಬುದ್ಧಿ ಕೊಟ್ಟ ರಾಮಸೇವಕ್ ತನ್ನ ಕೈಯಲ್ಲಿದ್ದ ಕತ್ತಿಯಿಂದ ಆಕೆಯ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ರುಂಡವನ್ನು ಕತ್ತರಿಸಿ ಅದರೊಂದಿಗೆ ಪೊಲೀಸ್ ಚೌಕಿಗೆ ತೆರಳಿ ಶರಣಾಗಿದ್ದಾನೆ.
ರಾಮಸೇವಕ್ ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿಯಾಗಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
Next Story