ದೇಶದ ಅತ್ಯುನ್ನತ ಹುದ್ದೆಯ ಅಭ್ಯರ್ಥಿ ರಾಷ್ಟ್ರಪತಿ ವಿಶ್ರಾಂತಿಗೃಹಕ್ಕೆ ಪ್ರವೇಶಿಸದಂತೆ ತಡೆ
ಶಿಮ್ಲಾ, ಜೂ,20: ರಾಷ್ಟ್ರಪತಿ ಹುದ್ದೆಗೆ ಎನ್ ಡಿಎ ಅಭ್ಯರ್ಥಿಯಾಗಿರುವ ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಹಾಗೂ ಅವರ ಕುಟುಂಬಸ್ಥರನ್ನು ಮೂರು ವಾರಗಳ ಹಿಂದಷ್ಟೇ ರಾಷ್ಟ್ರಪತಿ ಭವನಕ್ಕೆ ಪ್ರವೇಶಿಸದಂತೆ ತಡೆಯಲಾಗಿತ್ತು.
ಕೋವಿಂದ್ ಹಾಗೂ ಅವರ ಕುಟುಂಬಸ್ಥರು ಶಿಮ್ಲಾಗೆ ಪ್ರವಾಸಕ್ಕೆ ತೆರಳಿದ್ದರು. ಹಿಮಾಚಲ ಪ್ರದೇಶದ ರಾಜಧಾನಿಯಿಂದ 15 ಕಿ.ಮೀ. ದೂರದ ಮಶೋಬರಾ ತಲುಪಿದಾಗ ಅಲ್ಲಿನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲು ಅವರು ಬಯಸಿದ್ದರು. ಅದರಂತೆ ಅಲ್ಲಿಗೆ ತೆರಳಿದ್ದು, ಆದರೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಅವರನ್ನು ತಡೆಯಲಾಗಿತ್ತು.
ಮಶೋಬಾದ ಪರ್ವತದ ತುದಿಯಲ್ಲಿ ತಲೆಎತ್ತಿರುವ ವಿಶ್ರಾಂತಿ ಗೃಹವನ್ನು 1850ರಲ್ಲಿ ನಿರ್ಮಿಸಲಾಗಿತ್ತು. 1835ರಲ್ಲಿ ಬ್ರಿಟಿಷ್ ವೈಸರಾಯ್ ಇದರಲ್ಲಿದ್ದರು. ವರ್ಷದಲ್ಲಿ ಒಂದು ಬಾರಿ ರಾಷ್ಟ್ರಪತಿ ಇಲ್ಲಿಗೆ ಆಗಮಿಸುತ್ತಾರೆ. ಆ ಸಂದರ್ಭ ಅವರ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆ.
Next Story