ಕಾಸರಗೋಡಿನ ಗಾಝಾ ಬೋರ್ಡನ್ನು ತೆರವುಗೊಳಿಸಿದ ಪೊಲೀಸರು
ಕಾಸರಗೋಡು, ಜೂ. 23: ಕಾಸರಗೋಡು ತಳಂಗರದ ಬೀದಿಯಲ್ಲಿ ಗಾಝಾ ಎಂದು ಬರೆದ ಬೋರ್ಡನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಸ್ಥಳದ ಹೆಸರನ್ನು ಬದಲಾಯಿಸುವ ಹಕ್ಕು ಊರಿನವರಿಗೆ ಇಲ್ಲ ಎನ್ನುವ ಕಾನೂನಿನ ಪ್ರಕಾರ ಪೊಲೀಸರು ಗಾಝಾ ಬೋರ್ಡನ್ನು ತೆಗೆದುಹಾಕಿದ್ದಾರೆ.
ಗಾಝ ಎನ್ನುವ ಹೆಸರು ಇಟ್ಟದ್ದಕ್ಕೆ ಬಿಜೆಪಿ ನಾಯಕ ಕೆ. ಸುರೇಂದ್ರನ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿದ್ದರು.ವಿವಾದವಾದ ನಂತರ ಇಂಟಲಿಜೆನ್ಸ್ ಸ್ಥಳಕ್ಕಾಗಮಿಸಿ ತನಿಖೆ ನಡೆಸಿತ್ತು. ಆದರೆ ಅಲ್ಲಿ ವಿಪರೀತವಾಗಿ ಯಾವುದೂ ಪತ್ತೆಯಾಗಿರಲಿಲ್ಲ.
ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಆಗ್ರಹಿಸಿದ್ದರು. ’ ತುಂಬ ಚಿಕ್ಕ ಸ್ಥಳ ತುರುತ್ತಿ. ಈವರೆಗೂ ಒಂದು ಸಣ್ಣ ಕೇಸು ಕೂಡಾ ಅಲ್ಲಿಂದಾಗಿಲ್ಲ, ನಗರದ ತೀರಾಶಾಂತ ಪ್ರದೇಶ ಅದು’ ಎಂದು ಪೊಲೀಸರು ತಿಳಿಸಿದ್ದಾರೆ.
Next Story