ಲಕ್ನೋದಲ್ಲಿ ಬುದ್ಧನ ಪ್ರತಿಮೆಗೆ ಹಾನಿ,ಪ್ರತಿಭಟನೆ
ಲಕ್ನೋ,ಜೂ.25: ಇಲ್ಲಿಯ ಹಝರತಗಂಜ್ ಪ್ರದೇಶದಲ್ಲಿರುವ ಪಾರ್ಕ್ನಲ್ಲಿಯ ಬುದ್ಧನ ಪ್ರತಿಮೆಗೆ ದುಷ್ಕರ್ಮಿಗಳು ಹಾನಿಯನ್ನುಂಟು ಮಾಡಿರುವುದು ರವಿವಾರ ಬೆಳಕಿಗೆ ಬಂದಿದ್ದು, ಸ್ಥಳೀಯರು ಈ ಕೃತ್ಯವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಪ್ರತಿಮೆಗೆ ಹಾನಿಯಾಗಿರುವ ಸುದ್ದಿ ಹರಡುತ್ತಿದ್ದಂತೆ ಪಾರ್ಕ್ನಲ್ಲಿ ಜಮಾಯಿಸಿದ ಸ್ಥಳೀಯರು ಪ್ರತಿಭಟನೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಹಾನಿಗೀಡಾಗಿದ್ದ ಪ್ರತಿಮೆಯ ಭಾಗವನ್ನ್ನು ಬಳಿಕ ಸರಿಪಡಿಸಲಾಗಿದೆ. ಬುದ್ಧನ ಮೂರು ಕೈಬೆರಳುಗಳಿಗೆ ಹಾನಿಯುಂಟಾಗಿತ್ತು.
ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು,ತನಿಖೆ ನಡೆಯುತ್ತಿದೆ ಎಂದು ಎಸ್ಎಸ್ಪಿ ದೀಪಕಕುಮಾರ್ ತಿಳಿಸಿದರು.
Next Story