ಕೇಂದ್ರ ಸರಕಾರದ ಯೋಜನೆಗಳ ಹೆಸರು ಬದಲಾಯಿಸಿದರೆ ಅನುದಾನ ಸ್ಥಗಿತ: ರಾಮ್ಕೃಪಾಲ್ ಯಾದವ್
ಮಿಡ್ನಾಪುರ್, ಜೂ.29: ಪಶ್ಚಿಮ ಬಂಗಾಲ ಸರಕಾರವು ಕೇಂದ್ರ ಸರಕಾರದ ಕೆಲವು ಯೋಜನೆಗಳ ಹೆಸರು ಬದಲಾಯಿಸಿ ಅನುಷ್ಠಾನಗೊಳಿಸಿರುವುದು ಕಂಡುಬಂದರೆ ಕೇಂದ್ರದ ಅನುದಾನ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವ ರಾಮ್ಕೃಪಾಲ್ ಯಾದವ್ ಹೇಳಿದ್ದಾರೆ.
ಕೇಂದ್ರ ಸರಕಾರದ ಕೆಲವು ಯೋಜನೆಗಳ ಹೆಸರನ್ನು ಪ.ಬಂಗಾಲ ಸರಕಾರ ಬದಲಾಯಿಸಿ ಅನುಷ್ಠಾನಗೊಳಿಸಿರುವ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಪರಿಶೀಲಿಸಲಾಗುವುದು. ಇದು ನಿಜವಾದಲ್ಲಿ ಪ.ಬಂಗಾಲಕ್ಕೆ ನೀಡಲಾಗುವ ಅನುದಾನವನ್ನು ಸ್ಥಗಿತಗೊಳಿಸಲಾಗುವುದು ಎಂದವರು ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸಚಿವರು ಇಲ್ಲಿಗೆ ಆಗಮಿಸಿದ್ದರು.
Next Story