ಜಮ್ಮು - ಕಾಶ್ಮೀರದಲ್ಲಿ ಎನ್ ಕೌಂಟರ್ ಗೆ ಮೂವರು ಉಗ್ರರು ಬಲಿ
ಶ್ರೀನಗರ, ಜು.17: ಜಮ್ಮು ಮತ್ತು ಕಾಶ್ಮೀರದ ಬರಾಕಪೋರ ನಲ್ಲಿ ಭಾರತೀಯ ಸೇನೆಯ ಯೋಧರು ನಡೆಸಿದ ಎನ್ ಕೌಂಟರ್ ಗೆ ಎಲ್ ಇಟಿ ಸಂಘಟನೆ ಕಮಾಂಡರ್ ಸೇರಿದಂತೆ ಮೂವರು ಉಗ್ರರು ಬಲಿಯಾಗಿದ್ದಾರೆ.
ಮೃತಪಟ್ಟ ಮೂವರು ಅಮರನಾಥ ಯಾತ್ರಿಕರ ಬಸ್ ನ ಮೇಲೆ ದಾಳಿ ನಡೆಸಿದ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ಇಸ್ಮಾಯೀಲ್ ಸಹಚರರು ಎನ್ನಲಾಗಿದೆ. ಮೃತಪಟ್ಟ ಮೂವರ ಪೈಕಿ ಇಬ್ಬರನ್ನು ಗುರುತಿಸಲಾಗಿದ್ದು ಅವರ ಹೆಸರು ಮುದಸ್ಸರ್ ಹಜಮ್ ಮತ್ತು ಶೌಕತ್ ಲೋಹರ್ ಎಂದು ತಿಳಿದು ಬಂದಿದೆ. ವಿದೇಶದ ಇನ್ನೊಬ್ಬ ಉಗ್ರನ ಗುರುತು ಪತ್ತೆಯಾಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಳೆದ ಸೋಮವಾರ ಅಮರನಾಥ್ ಯಾತ್ರೆಗೆ ತೆರಳುತ್ತಿದ್ದ ಬಸ್ ನ ಮೇಲೆ ನಡೆದ ಉಗ್ರರ ದಾಳಿಯಲ್ಲಿ 8 ಮಂದಿ ಯಾತ್ರಿಕರು ಮೃತಪಟ್ಟಿದ್ದರು.
ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಮಾತಿನ ಚಕಮಕಿ ಮುಂದುವರಿದಿದೆ.
Next Story