ಕಳ್ಳಭಟ್ಟಿ ಸೇವಿಸಿ ಓರ್ವನ ಸಾವು; ಇಬ್ಬರು ಗಂಭೀರ
ಕುಂದಮಂಗಲಂ,ಜು.22: ಕಲ್ಲಿಕೋಟೆ ಕುಂದಮಂಗಲಂನ ಬಳಿ ಕಳ್ಳಭಟ್ಟಿ(ಸ್ಪಿರಿಟ್) ಸೇವಿಸಿ ಓರ್ವ ಮೃತಪಟ್ಟಿದ್ದಾನೆ. ಕುಂದಮಂಗಲಂ ಸಮೀಪದ ಮಲಯಮ್ಮ ಕಾಲನಿಯಲ್ಲಿ ಘಟನೆ ನಡೆದಿದ್ದು, ಎಕೆಜಿ ಕಾಲನಿಯ ಕೆ.ಸಿ.ಬಾಲನ್ ಎನ್ನುವವರು ಕಳ್ಳಭಟ್ಟಿಗೆ ಬಲಿಯಾಗಿದ್ದಾರೆ. ಈತನೊಂದಿಗೆ ಕಳ್ಳಭಟ್ಟಿ ಸೇವಿಸಿದ್ದ ಐದು ಮಂದಿಯನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಸಂದೀಪ್, ಚೆಕುಟ್ಟಿಎನ್ನುವವರ ಆರೋಗ್ಯಸ್ಥಿತಿ ಗಂಭೀರವಾಗಿದೆ.
ಬಾವಿ ಶುಚಿಗೊಳಿಸುವ ಕೆಲಸ ಮುಗಿಸಿ ಗುರುವಾರ ಸ್ಪಿರಿಟ್ ಸೇವಿಸಿದ್ದರು. ಇವರಲ್ಲಿ ಓರ್ವ ಆಸ್ಪತ್ರೆಯೊಂದರಲ್ಲಿ ನೌಕರನಾಗಿದ್ದು, ಆತ ಎಥೆನಾಲ್ನ್ನು ತಂದು ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story