ಕೋಟ್ಟಯಂನಲ್ಲಿ ಆರೆಸ್ಸೆಸ್ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಸಿಐಟಿಯು , ಡಿವೈಎಫ್ಐ ಕಚೇರಿಗಳಿಗೆ ಕಲ್ಲೆಸತ
ಕೋಟ್ಟಯಂ,ಜು.31: ತಿರುವನಂತಪುರಂನಲ್ಲಿ ಶನಿವಾರ ಆರೆಸ್ಸೆಸ್ ಕಾರ್ಯಕರ್ತನ ಕೊಲೆ ನಡೆದ ನಂತರ ಕೇರಳದಲ್ಲಿ ವ್ಯಾಪಕ ಅಹಿತಕರ ಘಟನೆಗಳು ನಡೆದಿದ್ದು, ಇಂದು ಕೂಡಾ ಮುಂದುವರಿದಿದೆ. ರವಿವಾರ ಮಧ್ಯ ರಾತ್ರಿ ಕೋಟ್ಟಯಂ ತಿರುನಕ್ಕರೆಯ ಆರೆಸ್ಸೆಸ್ ಕಾರ್ಯಾಲಯಕ್ಕೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಕಮ್ಯುನಿಸ್ಟ್ ಕಾರ್ಯಕರ್ತರು ಈ ಕೃತ್ಯವೆಸಗಿದ್ದಾರೆಂದು ಬಿಜೆಪಿ ಆರೋಪಿಸಿದೆ.
ಆರೆಸ್ಸೆಸ್ ಕಚೇರಿಗೆ ಬಾಂಬೆಸತವಾದ ಬಳಿಕ ಬೆಳಗ್ಗೆ ಮೂರು ಗಂಟೆಗೆ ಈ ಕಚೇರಿಯ ಸಮೀಪದಲ್ಲಿರುವ ಸಿಐಟಿಯು, ಡಿವೈಎಫ್ಐ ಕಚೇರಿಗಳಿಗೂ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ.
Next Story