ಹಣಕ್ಕಾಗಿ ತಂದೆಗೆ ಕೊಳ್ಳಿ ಇಟ್ಟ ಮಗ!
ರಾಣಾಘಾಟ್(ಪಶ್ಚಿಮಬಂಗಾಳ), ಆ.6: ಮರಗಳ ಮಾರಾಟದಿಂದ ಬಂದ ಹಣವನ್ನು ತನಗೆ ನೀಡಲಿಲ್ಲ ಎಂಬ ಕೋಪದಿಂದ ಮಗನೊಬ್ಬ 70ರ ಪ್ರಾಯದ ತಂದೆಯನ್ನು ಬೆಂಕಿಇಟ್ಟು ಸಾಯಿಸಿದ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ.
ರಾಣಾಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ರಬನ್ಬರ್ ಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೈದ್ಯನಾಥ್ ಬಿಸ್ವಾಸ್(70ವರ್ಷ) 90,000 ರೂ. ವೌಲ್ಯದ ಮರಗಳನ್ನು ಮಾರಾಟ ಮಾಡಿದ್ದರು. ಬಿಸ್ವಾಸ್ರ ಪುತ್ರ ಅಬೋಧ್ ಬಿಸ್ವಾಸ್ ಇದರಲ್ಲಿ ತನಗೆ ಸಮಪಾಲುಬೇಕೆಂದು ಬೇಡಿಕೆ ಇಟ್ಟಿದ್ದ. ತಂದೆ ತನ್ನ ಮಗನಿಗೆ ಸಮಪಾಲು ನೀಡಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಮಗ ತಂದೆ ಮಲಗಿದ್ದ ವೇಳೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾನೆ. ಆರೋಪಿಯ ತಾಯಿ ಸರಸ್ವತಿ ಬಿಸ್ವಾಸ್ ಬೆಂಕಿಗೆ ಸುಟ್ಟು ಗಾಯಗೊಂಡಿದ್ದ ಪತಿಯನ್ನು ಆಸ್ಪತ್ರೆಗೆ ಸಾಗಿಸಿದರೂ ಬೈದ್ಯನಾಥ್ ಬದುಕುಳಿಯಲಿಲ್ಲ.
ಪತಿಯನ್ನು ಬೆಂಕಿಯಿಂದ ಪಾರಾಗಿಸಲು ಯತ್ನಿಸಿದ್ದ ಸರಸ್ವತಿಗೆ ಸುಟ್ಟಗಾಯವಾಗಿದ್ದು, ಆಕೆಯನ್ನು ರಾಣಾಘಾಟ್ ಆಸ್ಪತ್ರಗೆ ಸೇರಿಸಲಾಗಿದೆ. ಸರಸ್ವತಿಯ ಇನ್ನೊಬ್ಬ ಮಗ ಸುಬೋಧ್ ಬಿಸ್ವಾಸ್ ನೀಡಿದ ದೂರಿದನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ