ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಪ್ರಕರಣ: ವಿಕಾಸ್ ಬರಾಲ ಬಂಧನ
ಹೊಸದಿಲ್ಲಿ, ಆ.9: ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದ ಬಿಜೆಪಿ ನಾಯಕ ವಿಕಾಸ್ ಬರಾಲ ಪೊಲೀಸ್ ಠಾಣೆಯಲ್ಲಿ ಶರಣಾದ ನಂತರ ಆತನನ್ನು ಬಂಧಿಸಲಾಗಿದೆ.
ವಿಕಾಸ್ ಶರಣಾದ ಚಂಡೀಗಢದ ಪೊಲೀಸ್ ಠಾಣೆಯ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದಕ್ಕೂ ಮೊದಲು ಪೊಲೀಸರ ಮುಂದೆ ಬರದೆ ತಲೆಮರೆಸಿಕೊಂಡಿದ್ದ ತಮ್ಮ ಪುತ್ರನ ಬಗ್ಗೆ ಹೇಳಿಕೆ ನೀಡಿದ್ದ ಹರ್ಯಾಣ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲ, ಯಾವ ತನಿಖೆಗೂ ಆತ ಸಹಕರಿಸಲಿದ್ದಾನೆ ಎಂದಿದ್ದರು.
ವಿಕಾಸ್ ಹಾಗೂ ಆತನ ಸ್ನೇಹಿತ ತಮ್ಮ ರಕ್ತ ಹಾಗೂ ಮೂತ್ರದ ಮಾದರಿಗಳನ್ನು ನೀಡಲು ನಿರಾಕರಿಸಿದ್ದರು ಎಂದು ಪೊಲೀಸರು ಹೇಳಿದ್ದರು.
Next Story