ಶಿಗ್ಗಾಂವ್ ನಲ್ಲಿ ಕಾರು ಪಲ್ಟಿ: ಐವರು ಮೃತ್ಯು
ಬೆಂಗಳೂರು, ಆ.21: ಹಾವೇರಿ ಜಿಲ್ಲೆಯ ಶಿಗ್ಗಾಂವ್ ನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಲಿಸುತ್ತಿದ್ದ ಕಾರೊಂದರ ಟಯರ್ ಸಿಡಿದು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಐವರು ಮೃತಪಟ್ಟ ಘಟನೆ ಇಂದು ನಡೆದಿದೆ.
ಮೃತಪಟ್ಟವರು ದಾವಣಗೆರೆ ಜಿಲ್ಲೆಯ ಹರಿಹರ ನಿವಾಸಿಗಳೆಂದು ತಿಳಿದು ಬಂದಿದೆ. ಈ ಪೈಕಿ ಮೂವರ ವಿವರ ಲಭ್ಯವಾಗಿದೆ. ಅಮೀರ್ ಖಾನ್, ಅಬೂಬಕರ್ ಮತ್ತು ಮುಹಮ್ಮದ್ ಇಸ್ಮಾಯೀಲ್ ಎಂದು ಗುರುತಿಸಲಾಗಿದೆ.
ಕಾರು ಮುಂಬೈನಿಂದ ಹರಹರದತ್ತ ತೆರಳುತ್ತಿದ್ದ ವೇಳೆ ಕಾರ್ ನ ಟಯರ್ ಸಿಡಿದು ಕಾರು ಪಲ್ಟಿ ಹೊಡೆಯಿತು ಎನ್ನಲಾಗಿದೆ. ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ. ಗಂಭೀರ ಗಾಯಗೊಂಡಿದ್ದ ಇನ್ನೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಶಿಗ್ಗಾಂವ್ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡಿರುವ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಕಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story