ಅತ್ಯಾಚಾರಿ ಗುರ್ಮೀತ್ ನದ್ದು ‘ಉದಾತ್ತ ವ್ಯಕ್ತಿತ್ವ’ ಎಂದು ಹೊಗಳಿದ ಸಾಕ್ಷಿ ಮಹಾರಾಜ್
ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ ಬಿಜೆಪಿ ಸಂಸದ
ಹೊಸದಿಲ್ಲಿ, ಆ.25: ದೇರಾ ಸಚ್ಚಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂಬ ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಬಾಬಾ ಗುರ್ಮೀತ್ ಒಬ್ಬ ಉದಾತ್ತ ವ್ಯಕ್ತಿಯಾಗಿದ್ದು, ಅವರ ವಿರುದ್ಧ ನ್ಯಾಯಾಲಯ ನೀಡಿರುವ ತೀರ್ಪು ಒಪ್ಪುವಂತದ್ದಲ್ಲ ಎಂದಿದ್ದಾರೆ.
ಈ ಬಗ್ಗೆ "ಜನತಾ ಕ ರಿಪೋರ್ಟರ್" (jantakareporter.com) ವರದಿ ಮಾಡಿದೆ. ದೇರಾ ಮುಖ್ಯಸ್ಥ ಅತ್ಯಾಚಾರಿ ಎನ್ನುವ ಸಿಬಿಐ ನ್ಯಾಯಾಲಯದ ತೀರ್ಪನ್ನು ಟೀಕಿಸಿದ ಸಾಕ್ಷಿ ಮಹಾರಾಜ್, “ಒಬ್ಬ ಮಹಿಳೆ ಮಾತ್ರ ಬಾಬಾ ವಿರುದ್ಧ ದೂರು ನೀಡಿದ್ದಾರೆ, ಕೋಟ್ಯಾಂತರ ಮಂದಿ ಅವರನ್ನು ಬೆಂಬಲಿಸಿದ್ದಾರೆ, ಆಕೆಯ ಮಾತುಗಳು ಕೋಟ್ಯಂತರ ಜನರ ವಿರುದ್ಧವಿದೆ" ಎಂದಿದ್ದಾರೆ
ಬಂಧಿತ ಗುರ್ಮೀತ್ ಜೊತೆಗೆ ಬಿಜೆಪಿಯ ಹಲವು ನಾಯಕರು ನಿಕಟ ಸಂಬಂಧವನ್ನು ಹೊಂದಿದ್ದರು. ಈ ಹಿಂದೆ ಪ್ರಧಾನಿ ಮೋದಿಯವರೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಗುರ್ಮೀತ್ ನನ್ನು ಹೊಗಳಿದ್ದರು.
Next Story