ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆ ವೇಳೆ ನಾಲ್ವರು ಕಾರ್ಮಿಕರ ಸಾವು
ಸಿವಾನ್(ಬಿಹಾರ),ಸೆ.9: ಸಿವಾನ್ ಜಿಲ್ಲೆಯಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಮಹಾದೇವ ಪೊಲೀಸ್ ಠಾಣಾ ವಾಪ್ತಿಯ ವಿವೇಕಾನಂದ ನಗರದ ಮನೆಯೊಂದರ ಸೆಪ್ಟಿಕ್ ಟ್ಯಾಂಕ್ ಕಟ್ಟಿಕೊಂಡಿದ್ದು, ಸ್ವಚ್ಛಗೊಳಿಸಲು ಈ ನಾಲ್ವರು ಕಾರ್ಮಿಕರು ಅದರೊಳಗೆ ಇಳಿದಿದ್ದರು. ಈ ವೇಳೆ ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಮೂವರು ಸ್ಥಳದ ಲ್ಲಿಯೇ ಸಾವನ್ನಪ್ಪಿದ್ದರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿ ರೆಳೆದಿದ್ದಾನೆ ಎಂದು ಜಿಲ್ಲಾಧಿಕಾರಿ ಧಮೇಂದ್ರ ಪ್ರಸಾದ ತಿಳಿಸಿದರು.
Next Story