ಶಂಕರ್ಸಿಂಗ್ ವಾಘೇಲರಿಂದ ನೂತನ ಪಕ್ಷ
ಅಹ್ಮದಾಬಾದ್ ಸೆ. 19: ಕಾಂಗ್ರೆಸ್ನ ಬಂಡಾಯ ನಾಯಕ ಶಂಕರ್ಸಿಂಗ್ ವಾಘೇಲ ಗುಜರಾತ್ನಲ್ಲಿ ತೃತೀಯ ರಂಗ ರೂಪಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್ನಲ್ಲಿ ಪರ್ಯಾಯ ರಾಜಕೀಯ ಶಕ್ತಿ ಕಾರ್ಯ ನಿರ್ವಹಿಸದು ಎಂಬುದು ಮಿಥ್ಯ ಎಂದರು.
ಕಳೆದ ತಿಂಗಳು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿರುವ ವಾಘೇಲ, ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಜನರು ನಿರಾಶೆಯಾಗಿದ್ದಾರೆ. ಆದುದರಿಂದ ಪರ್ಯಾಯ ಪಕ್ಷವೊಂದು ಬೇಕಾಗಿದೆ ಎಂದರು.
Next Story