ಯುವಕ-ಯುವತಿಯರ ‘ಅಸಭ್ಯ ವರ್ತನೆ’ ಅತ್ಯಾಚಾರಕ್ಕೆ ಕಾರಣ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್
ಹೊಸದಿಲ್ಲಿ, ಸೆ.20: ಯುವಕ ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಅಸಭ್ಯ ವರ್ತನೆ ಅತ್ಯಾಚಾರಕ್ಕೆ ಕಾರಣವಾಗುತ್ತದೆ. ಅವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
“ಈ ಜೋಡಿಗಳು ಬೈಕ್ ನಲ್ಲಿ ಹೋಗುವಾಗ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾರೆ. ಹುಡುಗ ಹುಡುಗಿಗೆ, ಹುಡುಗಿ ಹುಡುಗನಿಗೆ ತಿನ್ನಿಸುತ್ತಾರೆ. ಕಾರುಗಳಲ್ಲಿ, ಪಾರ್ಕ್ ಗಳಲ್ಲಿ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಗಳು ಅಸಭ್ಯ ವರ್ತನೆ ತೋರುತ್ತಾರೆ. ಎಲ್ಲರೂ ಅವರನ್ನು ನಿರ್ಲಕ್ಷಿಸುತ್ತಾರೆ. ಆದರೆ ಒಮ್ಮೆ ಅತ್ಯಾಚಾರ ನಡೆದರೆ ಪೊಲೀಸರ ವಿರುದ್ಧ ಕ್ರಮಕ್ಕೆ ಜನರು ಒತ್ತಾಯಿಸುತ್ತಾರೆ. ಆದ್ದರಿಂದ ಸರಿಯಾದ ಕ್ರಮವೆಂದರೆ ಜೋಡಿಗಳ ವಿರುದ್ಧ ಕ್ರಮ ಕೈಗೊಂಡು ಜೈಲಿಗಟ್ಟುವುದು” ಎಂದವರು ಹೇಳಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಗುರ್ಮೀತ್ ತಪ್ಪಿತಸ್ಥ ಎಂದು ಸಾಬೀತಾದ ನಂತರ ಆತನನ್ನು ಸಾಕ್ಷಿ ಮಹಾರಾಜ್ ಬೆಂಬಲಿಸುವಂತಹ ಹೇಳಿಕೆ ನೀಡಿದ್ದರು. ನಂತರ ಗುರ್ಮೀತ್ ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.