ಮುಂದಿನ ದೀಪಾವಳಿಗೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣ: ಸುಬ್ರಮಣಿಯನ್ ಸ್ವಾಮಿ
ಹೊಸದಿಲ್ಲಿ, ಅ.16: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದು ಮತ್ತು ಮುಂದಿನ ದೀಪಾವಳಿಯ ಸಂದರ್ಭ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಪಾಟ್ನದಲ್ಲಿ ವಿರಾಟ್ ಹಿಂದೂಸ್ತಾನ್ ಸಂಘ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
"ಈ ವಾರ ನಾವು ದೀಪಾವಳಿ ಆಚರಿಸುತ್ತಿದ್ದೇವೆ. ಮುಂದಿನ ವರ್ಷದ ದೀಪಾವಳಿಗೆ ಭಕ್ತರಿಗಾಗಿ ಅಯೋಧ್ಯೆಯಲ್ಲಿ ರಾಮಮಂದಿರ ಸಿದ್ಧವಾಗಿರುತ್ತದೆ. ಬಿಹಾರದಲ್ಲಿ ರಾಮಮಂದಿರ ಕಟ್ಟಲು ವಿರಾಟ್ ಹಿಂದೂಸ್ಥಾನ್ ಸಂಘ ನೇತೃತ್ವ ನೀಡಬೇಕು. ಉತ್ತರ ಪ್ರದೇಶದ ಇತಿಹಾಸ ಪ್ರಧಾನ ಸ್ಥಳಗಳಲ್ಲಿ ಇಂತಹ ದೇವಸ್ಥಾನಗಳನ್ನು ಕಟ್ಟಬೇಕಾಗಿದೆ ಎಂದು ಅವರು ಈ ಸಂದರ್ಭ ಹೇಳಿದರು.
Next Story