ತನಿಖೆಯಿಂದ ಜಡ್ಜ್, ಸರಕಾರಿ ಅಧಿಕಾರಿಗಳ ರಕ್ಷಣೆಗೆ ರಾಜಸ್ಥಾನ ಸರಕಾರದಿಂದ ಆಧ್ಯಾದೇಶ
ಜೈಪುರ, ಅ. 20: ಸರಕಾರದ ಪೂರ್ವಾನುಮತಿ ಇಲ್ಲದೆ ಕರ್ತವ್ಯದ ಕ್ರಮದ ಬಗ್ಗೆ ತನಿಖೆ ನಡೆಸುವುದರಿಂದ ಹಾಲಿ ಹಾಗೂ ಮಾಜಿ ನ್ಯಾಯಮೂರ್ತಿ, ದಂಡಾಧಿಕಾರಿ ಹಾಗೂ ಸರಕಾರಿ ಅಧಿಕಾರಿಗಳಿಗೆ ರಕ್ಷಣೆ ನೀಡುವ ವಿವಾದಾತ್ಮಕ ಆಧ್ಯಾದೇಶಕ್ಕೆ ವಸುಂಧರಾ ರಾಜೇ ಆಡಳಿತ ಅನುಮೋದನೆ ನೀಡಿದೆ.
ಸರಕಾರದ ಅನುಮೋದನೆ ಪಡೆಯದೆ ಕರ್ತವ್ಯ ನಿರತ ನ್ಯಾಯಾಧೀಶ, ದಂಡಾಧಿಕಾರಿ ಹಾಗೂ ಸರಕಾರಿ ಉದ್ಯೋಗಿಗಳ ವಿರುದ್ಧ ಮ್ಯಾಜಿಸ್ಟೇಟರು ತನಿಖೆಗೆ ಆದೇಶ ನೀಡುವಂತಿಲ್ಲ ಎಂದು ಸಿಆರ್ಪಿಸಿಯ ಕಲಂ 156(3) ತಿದ್ದುಪಡಿಯಲ್ಲಿ ಹೇಳಲಾಗಿದೆ.
Next Story