ಯು. ನಾರಾಯಣ ಬಂಗೇರ
ಮಂಗಳೂರು, ಮೇ 28: ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ಮುಖಂಡ ಉರ್ವ ನಾರಾಯಣ ಬಂಗೇರ (77)ತೀವ್ರ ಅಸೌಖ್ಯದಿಂದ ಮೇ 23ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಮತ್ತು ಒಬ್ಬ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅನೇಕ ವರ್ಷಗಳ ಕಾಲ ಉರ್ವ ಅಶೋಕನಗರ ಪ್ರದೇಶದಲ್ಲಿ ಗೇರುಬೀಜ, ಬೀಡಿ, ಹೆಂಚಿನ ಕೆಲಸಗಾರರ ಸಮಸ್ಯೆಗಳನ್ನು ಬಗೆಹರಿಸಲು ಸಂಘಟನಾ ಹೋರಾಟ ಮಾಡಿದ ಬಂಗೇರಾ ಪಕ್ಷದ ಉರ್ವ ಶಾಖೆಯ ಕಾರ್ಯದರ್ಶಿಯಾಗಿ, ಜಿಲ್ಲಾ ಮತ್ತು ಮಂಗಳೂರು ತಾಲೂಕು ಸಮಿತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ದ.ಕ. ಜಿಲ್ಲಾ ಹೆಂಚಿನ ಕೆಲಸಗಾರರ ಸಂಘದ ಜಿಲ್ಲಾ ಸಹ ಕಾರ್ಯದರ್ಶಿಯಾಗಿ, ಬೀಡಿ ಆ್ಯಂಡ್ ಟೋಬೆಕ್ಕೊ ಲೇಬರ್ ಯೂನಿಯನ್ನ ಉಪಾಧ್ಯಕ್ಷರಾಗಿ, ಬೀಡಿ ಫೇಡರೇಶನ್ನ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.
ಸಂತಾಪ: ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಪಕ್ಷದ ಜಿಲ್ಲಾ ನಾಯಕರಾದ ಎಚ್.ವಿ.ರಾವ್, ಸೀತಾರಾಂ ಬೇರಿಂಜ, ಬಿ.ಕೆ. ಕೃಷ್ಣಪ್ಪ ಸಂತಾಪ ಸೂಚಿಸಿದ್ದಾರೆ.
Next Story