ಶಾಂತರಾಮ ಭಂಡಾರಿ
ಉಡುಪಿ, ಜ.12: ಮಂದಾರ್ತಿ ಮೇಳದ ಪ್ರಧಾನ ಚಂಡೆವಾದಕ ಶಾಂತರಾಮ ಲಕ್ಷ್ಮಣ ಭಂಡಾರಿ ಅವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು.
ಭಂಡಾರಿ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪ್ರಸಕ್ತ ಇವರು ಮಂದಾರ್ತಿ ಮೇಳದ ಕಲಾವಿದರಾಗಿ ತಿರುಗಾಟ ಮಾಡುತಿದ್ದರು. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.
Next Story