ಎಂ.ಪಿ.ಅಬ್ದುರ್ರಹ್ಮಾನ್ ಮುಸ್ಲಿಯಾರ್
ಮಂಗಳೂರು, ಮೇ 19: ಸಮಸ್ತ ಕಾರ್ಯಕರ್ತ ಎಂ.ಪಿ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಮಾಪಾಲ್(48) ಅಲ್ಪಕಾಲದ ಅಸೌಖ್ಯದಿಂದ ನಾಟೆಕಲ್ ಮಂಗಳನಗರದ ಸ್ವಗೃಹದಲ್ಲಿ ರವಿವಾರ ಬೆಳಗ್ಗೆ ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಅಬ್ದುರ್ರಹ್ಮಾನ್ ಮುಸ್ಲಿಯಾರ್ ಉಪ್ಪಿನಂಗಡಿ, ಬೋಳಂತೂರು, ಸುರತ್ಕಲ್, ಮಂಗಳನಗರ, ಕಿನ್ಯ, ದೇರಳಕಟ್ಟೆ, ನಾಟೆಕಲ್, ವಿಜಯನಗರ ಎಂಬ ಸ್ಥಳಗಳಲ್ಲಿ ಅಧ್ಯಾಪಕರಾಗಿ ಸೇವೆಗೈದಿದ್ದಾರೆ.
ಸಂತಾಪ: ಅಬ್ದುರ್ರಹ್ಮಾನ್ ಮುಸ್ಲಿಯಾರ್ ಸುನ್ನೀ ಸಂದೇಶ ಪತ್ರಿಕಾ ಬಳಗದ ಹಾಜಿ ಕೆ.ಎಸ್ ಹೈದರ್ ದಾರಿಮಿ ಕರಾಯ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಮುಸ್ತಫ ಫೈಝಿ ಕಿನ್ಯ, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಸಿದ್ದೀಖ್ ಫೈಝಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ ಕಣ್ಣೂರ್, ನೌಶಾದ್ ಹಾಜಿ ಸೂರಲ್ಪಾಡಿ, ಎಂ.ಎ.ಅಬ್ದುಲ್ಲಾ ಹಾಜಿ ಬೆಲ್ಮ ರೆಂಜಾಡಿ ಸಲೀಂ ಯಮಾನಿ ಬೋಳಂತೂರು, ರಫೀಖ್ ಅಜ್ಜಾವರ, ಫತ್ತಾಹ್ ಫೈಝಿ ಕಿನ್ಯ, ಬಶೀರ್ ಅಝ್ಹರಿ ಬಾಯಾರ್, ಜಬ್ಬಾರ್ ಮುಸ್ಲಿಯಾರ್ ಕರಾಯ, ಅಬ್ದುರ್ರಹ್ಮಾನ್ ಫೈಝಿ ಫಜೀರ್, ಮುಸ್ತಫ ಕಮಾಲ್ ಉಚ್ಚಿಲ ಹಾಗೂ ಸುನ್ನೀ ಸಂದೇಶ ಪತ್ರಿಕಾ ಬಳಗ ಮತ್ತು ಕಿಸಾ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.