ಕುಂದಾಪುರ, ಜೂ.1: ಕುಂದಾಪುರ ತಾಲೂಕು ನಿವೃತ್ತ ಸರ್ವೆಯರ್ ರತ್ನಾಕರ ಖಾರ್ವಿ(79) ಅವರು ಅಲ್ಪಕಾಲದ ಅಸೌಖ್ಯದಿಂದ ಕುಂದಾಪುರ ಖಾರ್ವಿ ಕೆಳಕೇರಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು. ಕುಂದಾಪುರ ಸೇರಿದಂತೆ ಅವಿಭಜಿತ ಜಿಲ್ಲೆಗಳ ಹಲವೆಡೆ ಸೇವೆಸಲ್ಲಿಸಿದ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.