ಎನ್. ಹಮೀದ್
ಬಂಟ್ವಾಳ : ತಾಲೂಕಿನ ಕಡೇಶಿವಾಲಯದ ನಚ್ಚಬೆಟ್ಟು ನಿವಾಸಿ, ದಿ. ಉಮರ್ ಅವರ ಪುತ್ರ ಎನ್. ಹಮೀದ್ (42) ಅವರು ಹೃದಯಾಘಾತದಿಂದ ಶನಿವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.
ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದ ಅವರು, ಕೆಲ ವರ್ಷಗಳ ಕಾಲ ವಾರ್ತಾಭಾರತಿ ಸಂಸ್ಥೆಯಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸಿ, ಬಳಿಕ ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಚಾಲಕರಾಗಿ ದುಡಿಯುತ್ತಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
Next Story