ಪಚ್ಚೇರುಗುತ್ತು ನಾಭಿರಾಜ ಕೆಲ್ಲ
ಬಂಟ್ವಾಳ, ಸೆ. 5: ಪ್ರಗತಿಪರ ಕೃಷಿಕ, ಹಿರಿಯ ಕಾಂಗ್ರೆಸಿಗ ಬಂಟ್ವಾಳ ತಾಲೂಕು ಪಿಲಿಮೊಗರು ಗ್ರಾಮದ ಬುಡೋಳಿ ಪಟೇಲರ ಮನೆಯ ಪಚ್ಚೇರುಗುತ್ತು ನಾಭಿರಾಜ ಕೆಲ್ಲ (87) ಅವರು ಸೆ. 2ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅವರು ಅಜ್ಜಿಬೆಟ್ಟು ಶ್ರೀ ಆದಿನಾಥ ಪದ್ಮಾವತಿ ಅತಿಶಯ ಕ್ಷೇತ್ರದ ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸುವಲ್ಲಿ ಶ್ರಮಿಸಿದ್ದರು. ಪರಿಸರದ ದೈವ, ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯಲ್ಲಿ ಸದಸ್ಯರಾಗಿದ್ದರು. ಮಾಜಿ ಸಚಿವ ಬಿ.ರಮಾನಾಥ ರೈ, ಜಿಪಂ ಸದಸ್ಯ ಬಿ.ಪದ್ಮಶೇಖರ ಜೈನ್, ಬಂಟ್ವಾಲ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.
Next Story