ಕೀಳಂಜೆ ದಿನೇಶ್ ಶೆಟ್ಟಿ
ಉಡುಪಿ, ನ.11: ಹಾವಂಜೆ ಗ್ರಾಮದ ಕೀಳಂಜೆ ಭುಜಂಗ ಶೆಟ್ಟಿ ಎಂಬವರ ಮಗ ದಿನೇಶ್ ಶೆಟ್ಟಿ(49) ಅಲ್ಪಕಾಲದ ಅಸೌಖ್ಯದಿಂದ ಕೀಳಂಜೆಯ ಸ್ವಗೃಹದಲ್ಲಿ ನ.11ರಂದು ನಿಧನರಾದರು.
ಮೃತರು ಹುಬ್ಬಳ್ಳಿಯಲ್ಲಿ ಹೋಟೇಲ್ ಹಾಗೂ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದರು. ತಂದೆ, ತಾಯಿ, ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಮತ್ತು ಸಹೋದರ ಉಡುಪಿ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಕೀಳಂಜೆ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಜಯಶೆಟ್ಟಿ ಬನ್ನಂಜೆ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story