ಅಡ್ಡೂರು ಅಬ್ಬೊನಾಕ
ಮಂಗಳೂರು, ಡಿ.22: ಗುರುಪುರ ಅಡ್ಡೂರಿನ ಹಿರಿಯ ಕಾಂಗ್ರೆಸ್ ಮುಂದಾಳು, ಧಾರ್ಮಿಕ ಮುಖಂಡ, ಯು.ಪಿ.ಅಬ್ಬೊನಾಕ(78) ಅಲ್ಪಕಾಲದ ಅಸೌಖ್ಯದಿಂದ ಡಿ.22ರಂದು ಬೆಳಗ್ಗೆ ಅಡ್ಡೂರಿನ ಸ್ವಗೃಹದಲ್ಲಿ ನಿಧನರಾದರು.
ಉದ್ಯಮಿಯೂ ಆಗಿದ್ದ ಇವರು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಕಳಸ ಜುಮಾ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಅಡ್ಡೂರು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಯಿತು. ಯು.ಪಿ.ಅಬ್ಬೊನಾಕ ನಿಧನಕ್ಕೆ ಮಾಜಿ ಸಚಿವ ರಮಾನಾಥ ರೈ, ಅಡ್ಡೂರು ಬದ್ರಿಯಾ ಮಸೀದಿಯ ಅಧ್ಯಕ್ಷ ಟಿ.ಸೈಯದ್, ಮಾಜಿ ಸಚಿವ ಮೊಯ್ದಿನ್ ಬಾವ, ಗುರುಪುರ ಗ್ರಾಪಂ ಸದಸ್ಯ ಎ.ಕೆ.ಅಶ್ರಫ್ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.
Next Story