ಸದಾಶಿವ ನಾಯಕ್
ಬಂಟ್ವಾಳ, ಜ. 13: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿವೃತ್ತ ಅಧಿಕಾರಿ, ಪುಂಜಾಲಕಟ್ಟೆ ನಿವಾಸಿ ಹಂಚಿಕಟ್ಟೆ ಸದಾಶಿವ ನಾಯಕ್( 68) ಅವರು ಹೃದಯಾಘಾತದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಇವರು ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಸಿಬಂದಿಯಾಗಿ ವಿವಿಧೆಡೆ ಕರ್ತವ್ಯ ನಿರ್ವಹಿಸಿ ಬೆಳ್ತಂಗಡಿ, ಮಡಂತ್ಯಾರು, ವಗ್ಗ ಶಾಖೆಗಳಲ್ಲಿ ಪ್ರಬಂಧಕರಾಗಿ ನಿವೃತ್ತಿ ಹೊಂದಿದ್ದರು.
Next Story