ಪೆರ್ಣಂಕಿಲ ಭೋಜ ರಾವ್
ಉಡುಪಿ, ಜೂ.8: ಹಿರಿಯ ಹೋಟೆಲ್ ಉದ್ಯಮಿ ಪೆರ್ಣಂಕಿಲ ಭೋಜ ರಾವ್(92) ಉಡುಪಿಯಲ್ಲಿ ಇತ್ತೀಚೆಗೆ ನಿಧನರಾದರು. ಮೂಲತಃ ಉಡುಪಿ ಜಿಲ್ಲೆಯ ಪೆರ್ಣಂಕಿಲದವರಾದ ಭೋಜ ರಾವ್, 1926ರಲ್ಲಿ ವಿಜಯವಾಡ ದಲ್ಲಿ ಸ್ಥಾಪನೆಗೊಂಡ ‘ವೆಲ್ಕಮ್ ಹೋಟೆಲ್’ ಹಾಗೂ 1960ರಲ್ಲಿ ಆರಂಭ ಗೊಂಡ ವಿಜಯವಾಡದ ಪ್ರಥಮ ಹವಾನಿಯಂತ್ರಿತ ‘ಎಸ್ಕಿಮೊ ರೆಸ್ಟೋರೆಂಟ್’ ಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.
ಅವರು ವಿಜಯವಾಡ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷರಾಗಿದ್ದರು. ಮದ್ರಾಸಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ದಿ.ಕು.ಶಿ. ಹರಿದಾಸ ಭಟ್ಟ, ದಿ.ಸೇವ ನಮಿರಾಜ ಮಲ್ಲ ಮೊದಲಾದ ಸಾಹಿತಿಗಳ ಒಡನಾಟ ಹೊಂದಿದ್ದರು. ವಿಜಯವಾಡ ಕನ್ನಡ ಸೇವಾ ಸಂಘದ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ ವಿಜಯವಾಡದ ಕನ್ನಡಿಗರಿಗಾಗಿ ಅಲ್ಲಿರುವ ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ಏರ್ಪಾಡು ಮಾಡುತಿದ್ದರು.
ಭೋಜ ರಾವ್ ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಾಂದವರನ್ನು ಅಗಲಿದ್ದಾರೆ.
Next Story