ಸಯ್ಯದ್ ಇಬ್ರಾಹಿಂ ತಂಙಳ್
ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಮದ ಪರ್ಲಡ್ಕ ಗೋಳಿಕಟ್ಟೆ ನಿವಾಸಿಯಾಗಿದ್ದ ಬಿ.ಎಸ್.ಇಬ್ರಾಹಿಂ ತಂಙಳ್ ಕೋಲ್ಪೆ ಯಾನೆ ಜಬ್ಬಾರ್ ತಂಙಳ್(70) ಸೋಮವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಕೆಲ ದಿನಗಳ ಹಿಂದೆ ವಾಹನ ಅಪಘಾತದಿಂದ ಗಾಯಗೊಂಡಿದ್ದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಬಂಧುಗಳನ್ನು ಅಗಲಿದ್ದಾರೆ.
Next Story