ಕೆ.ಆರ್.ಕೊತ್ವಾಲ್
ಕುಂದಾಪುರ, ಆ.27: ನಿವೃತ್ತ ಅಂಚೆ ಅಧಿಕಾರಿ, ಲೇಖಕ, ಸಮಾಜ ಸೇವಕ, ನಗರದ ಪ್ರಕಾಶ್ ಇನ್ಸ್ಟಿಟ್ಯೂಟ್ನ ಸ್ಥಾಪಕ ಕೆ.ರಾಮಚಂದ್ರ ಕೊತ್ವಾಲ್ (92) ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಅವರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ವೃತ್ತಿ, ಪ್ರವೃತ್ತಿ ಎರಡರಲ್ಲೂ ಕ್ರೀಯಾಶೀಲರಾಗಿದ್ದ ಕೊತ್ವಾಲರು ಬೋರ್ಡ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘ, ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಸಕ್ರಿಯ ಸದಸ್ಯರಾಗಿದ್ದರು. ಇವರು ಲೇಖಕರೂ ಅಂಕಣಕಾರರೂ ಆಗಿ ಜನಪ್ರಿಯರಾಗಿದ್ದರು.
Next Story