ಕೃಷ್ಣ ಬಲ್ಯಾಯ
ಮಂಗಳೂರು,ಸೆ.2: ಪುತ್ತೂರು ಶಾಂತಿಗೋಡು ನಿವಾಸಿ ಮುಂಡೋಡಿ ಕೃಷ್ಣ ಬಲ್ಯಾಯ (92) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಐವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಪ್ರಗತಿಪರ ಕೃಷಿಕ, ಸಮಾಜಸೇವಕರೂ ಆಗಿದ್ದ ಅವರು ಕುಲಕಸುಬು, ನಾಟಿವೈದ್ಯ ಮತ್ತು ಮಾಂತ್ರಿಕ ವಿದ್ಯೆಯಲ್ಲೂ ಪರಿಣಿತರಾಗಿದ್ದರು.
Next Story