ಕಲ್ಲಾಪು ತಿಮ್ಮಪ್ಪ ಶೆಟ್ಟಿಗಾರ್ ನಿಧನ
ಹಳೆಯಂಗಡಿ,ಮಾ.30 : ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನದ ಮಾಜಿ ಮೊಕ್ತೇಸರ, ಪಡುಪಣಂಬೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ವ್ಯವಸ್ಥಾಪಕರಾಗಿದ್ದ ತಿಮ್ಮಪ್ಪ ಶೆಟ್ಟಿಗಾರ್ (72ವರ್ಷ) ಬುಧವಾರ ನಿಧನರಾದರು. ಅವರು ಪತ್ನಿ, ಓರ್ವಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಕಲ್ಲಾಪು ದೇಗುಲದ ಅಭಿವ್ರದ್ಧಿಯಲ್ಲಿ ದುಡಿದಿದ್ದ ಅವರು ಅಲ್ಲಿನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆಗಿದ್ದರು. ವಾಚನಾಲಯ ಸಂಘದ ಪ್ರಮುಖರೂ ಆಗಿದ್ದ ಅವರು ಪದ್ಮಶಾಲಿ ಸಮಾಜದ ಮುಂದಾಳುವಾಗಿದ್ದರು. ಅನೇಕ ಸಾಮಾಜಿಕ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದರು
Next Story