ಅಬ್ದುರ್ರಝಾಕ್
ಪುತ್ತೂರು, ಮೇ 3: ತಾಲೂಕಿನ ಬಲ್ನಾಡು ಗ್ರಾಮದ ಬುಳೇರಿಕಟ್ಟೆ ನಿವಾಸಿ ಮೊಯ್ದುಕುಂಞಿ ಅವರ ಪುತ್ರ ಅಬ್ದುರ್ರಝಾಕ್ (42) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ರಝಾಕ್ ಅವರು ಪ್ರಸ್ತುತ ಪುತ್ತೂರು ಪರ್ಲಡ್ಕದ ಗೋಳಿಕಟ್ಟೆ ಎಂಬಲ್ಲಿ ವಾಸವಾಗಿದ್ದು, ವಿದೇಶದಲ್ಲಿ ಹಲವಾರು ಸಂಘಟನೆಗಳಲ್ಲಿ ತೊಂಡಗಿಸಿಕೊಂಡಿದ್ದರು. ಕೆಐಸಿ ಕುಂಬ್ರ ಇದರ ಯುಎಸ್ಎ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
Next Story