ಬಿ.ಜಿ.ವಸಂತ್
ಮಡಿಕೇರಿ ಜು.8: ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಸಾಹಿತ್ಯದ ಮೂಲಕ ಛಾಪು ಮೂಡಿಸಿರುವ ಕೊಡಗಿನ ಗೌರಮ್ಮ ಅವರ ಏಕೈಕ ಪುತ್ರ ಬಿ.ಜಿ.ವಸಂತ್(86) ಅವರು ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಅಂತ್ಯಕ್ರಿಯೆ ನಗರದ ಕೊಡಗು ಬ್ರಾಹ್ಮಣರ ಸಮಾಜದ ರುದ್ರಭೂಮಿಯಲ್ಲಿ ನೆರವೇರಿತು.
ನೆೇತ್ರದಾನ; ಬಿ.ಜಿ. ವಸಂತ್ ಅವರ ಆಶಯದಂತೆಯೆ ಅವರ ಮರಣದ ಬಳಿಕ ಕುಟುಂಬಸ್ಥರ ಒಪ್ಪಿಗೆಯನ್ನು ಪಡೆದು ನೇತ್ರಗಳನ್ನು ಪಡೆಯಲಾಯಿತು.
ಸಂತಾಪ: ಬಿ.ಜಿ.ವಸಂತ್ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಜನಾನುರಾಗಿಯಾಗಿದ್ದು, ಇವರ ಸಾವಿಗೆ ವಿವಿಧ ಸಂಘ ಸಂಸ್ಥೆಗಳು ತೀವ್ರ ಸಂತಾಪವನ್ನು ವ್ಯಕ್ತಪಡಿಸಿವೆ.
Next Story