ಮಂಗಳೂರು, ಜು.28: ಖ್ಯಾತ ಜೋತಿಷಿ ಶತಾಯುಷಿ ಪೂಂಜಾ ನರಸಿಂಹ ಹೊಳ್ಳ (100) ಅವರು ಅಲ್ಪಕಾಲದ ಅಸೌಖ್ಯದಿಂದ ಬಂಟ್ವಾಳದ ಸಿದ್ಧಕಟ್ಟೆಯ ಪೂಂಜಾದಲ್ಲಿ ನಿಧನರಾಗಿದ್ದಾರೆ.
ಮಂಗಳೂರಿನ ಮಂಗಳಾದೇವಿ, ಕೊಲ್ಲೂರು ಹಾಗೂ ಸಿದ್ಧಕಟ್ಟೆಯಲ್ಲಿ ಜೋತಿಷ್ಯ ಹೇಳುತ್ತಿದ್ದ ನರಸಿಂಹ ಹೊಳ್ಳ ಅವರು ಕೊಲ್ಲೂರು ಜೋಯಿಸರು ಎಂದೇ ಕರೆಸಿಕೊಂಡಿದ್ದರು.