ಕೆ.ಬಿ. ರಮಾನಾಥ ಶೆಟ್ಟಿ
ಕೊಣಾಜೆ,ಸೆ.13: ಬಾಕ್ರಬೈಲ್ನ ಕೆ.ಬಿ.ರಮಾನಾಥ ಶೆಟ್ಟಿ(92) ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾಗಿದ್ದಾರೆ. ಹೋಮಿಯೋಥಿ ವೈದ್ಯರಾಗಿದ್ದ ಅವರು ಹಿಂದೆ ಎಲ್ಎಲ್ಎಲ್ಬಿ ಹಾಗೂ ಮನಶಾಸ್ತ್ರದಲ್ಲಿ ಪದವಿಯನ್ನೂ ಪಡೆದಿದ್ದರು. ಅಲ್ಲದೆ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದ ಅವರು ಅವರು ಮನೆಯಲ್ಲಿದ್ದುಕೊಂಡೇ ಉಚಿತವಾಗಿ ಔಷಧಿಯನ್ನು ಕೊಡುತ್ತಿದ್ದರು. ಪಾತೂರು ಸೂರ್ಯೇಶ್ವರ ದೇವಸ್ಥಾನ ಮತ್ತು ಬಜಿಲಾಡಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಡೆವಲಪ್ಮೆಂಟ್ ಟ್ರಸ್ಟಿಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು.ಇವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದಾರೆ.
Next Story