ಕಡತ ಕಾಣೆಯಾಗಿದೆ !
ಮಾನ್ಯರೇ,
ಮೂಡುಬಿದಿರೆ ಹೋಬಳಿ ಬೆಳುವಾಯಿ ಗ್ರಾಮದಲ್ಲಿ ನಾನು ಹೊಂದಿರುವ ಕೃಷಿ ಜಮೀನನ್ನು ಭೂ ಮಾಪನ ಇಲಾಖೆಯು ಪೋಡಿ ಮಾಡಿ ಹೊಸ ಸರ್ವೇ ನಂಬರ್ಅನ್ನು ನೀಡಿರುತ್ತದೆ. (ಸ.ನಂ. 722/2) ಮತ್ತು 723/2) ಈ ಹೊಸ ಸರ್ವೇ ನಂಬ್ರ ನೀಡಿದರೆ ಗಣಕೀಕೃತ ಪಹಣಿ ಪತ್ರಿಕೆ ಲಭ್ಯ. ಆದರೆ ಎಫ್.ಎಂ.ಬಿ. ನಕ್ಷೆಯನ್ನು ಇಲಾಖೆಯು ವಿತರಿಸುತ್ತಿಲ್ಲ.
ಎಫ್.ಎಂ.ಬಿ. ನಕ್ಷೆಗೆ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದರೆ ನಿಮ್ಮ ಕಡತ ಕಾಣೆಯಾಗಿದೆ ಹಾಗಾಗಿ ನಕ್ಷೆ ನೀಡಲು ಆಗುತ್ತಿಲ್ಲ ಎಂದು ತಪಾಸಕರು ಮತ್ತು ವಿಷಯ ನಿರ್ವಾಹಕರು ಬಾಯ್ದೆರೆ ಹೇಳುತ್ತಾ ವಿಷಾದ ವ್ಯಕ್ತಪಡಿಸುತ್ತಾರೆ.
ಯಾರಿಗಾದರೂ ನನ್ನ ಕಡತ ಸಿಕ್ಕಿದರೆ ದಯಮಾಡಿ ಮೂಡುಬಿದಿರೆಯ ಭೂ ಮಾಪನ ಶಾಖೆಗೆ ತಲುಪಿಸಬೇಕಾಗಿ ಪ್ರಾರ್ಥನೆ. ಪ್ಲಾಟಿಂಗ್ ಮಾಡಿ ನಾಲ್ಕು ವರ್ಷ ಆಗಿದೆ. ನಕ್ಷೆ ವಿತರಿಸಲು ಇಲಾಖೆ ಅಶಕ್ತವಾಗಿದೆ. ಕಡತವನ್ನು ಹುಡುಕಿಕೊಟ್ಟವರಿಗೆ ಬಹುಮಾನವಿದೆ.
Next Story