ಹೋರಾಟಕ್ಕೆ ಸಿಕ್ಕ ಜಯ
ಮಾನ್ಯರೇ,
ಇಂದು ರಾಜ್ಯ ಸಂಪುಟವು ಬಾಬಾಬುಡಾನ್ ದರ್ಗಾ ವಿಷಯದ ಬಗ್ಗೆ ರಚಿಸಲಾಗಿದ್ದ ಪರಿಣಿತರ ಸಮಿತಿಯ ವರದಿಯನ್ನು ಇಡಿಯಾಗಿ ಒಪ್ಪಿಕೊಂಡಿದೆ. ವರದಿಗಳ ಪ್ರಕಾರ ನಾಗಮೋಹನ್ದಾಸ್, ರಹಮತ್ ತರೀಕೆರೆ, ಸ. ಶೆಟ್ಟರ್ ಇದ್ದ ಪರಿಣಿತರ ಸಮಿತಿಯು ಸಾರಾಂಶದಲ್ಲಿ ಕೋಮು ಸೌಹಾರ್ದ ವೇದಿಕೆಯ ನಿಲುವನ್ನು ಎತ್ತಿಹಿಡಿದಿದೆ ಹಾಗೂ ಬಾಬಾಬುಡಾನ್ ದರ್ಗಾದ ಧಾರ್ಮಿಕ ಸ್ವರೂಪವನ್ನು ಬದಲಿಸಿ ಆಗಮ ಪದ್ಧತಿಯಲ್ಲಿ ಅರ್ಚಕರ ಮೂಲಕ ಪೂಜೆ ಮಾಡುವ ಪದ್ಧತಿಯನ್ನು ಜಾರಿ ಮಾಡಬೇಕೆಂದು ಶಿಫಾರಸು ಮಾಡಿದ್ದ 2010ರ ದತ್ತಿ ಆಯುಕ್ತರ ವರದಿಯನ್ನು ತಿರಸ್ಕರಿಸಿದೆ. ಇದು ಕೋಮು ಸೌಹಾರ್ದ ವೇದಿಕೆಯ ಹೋರಾಟಕ್ಕೆ ಸಿಕ್ಕ ವಿಜಯವಾಗಿದೆ. ಹಾಗೆಯೇ ಗೌರಿಯವರು ದಣಿವರಿಯದೆ ತೊಡಗಿಸಿಕೊಂಡಿದ್ದ ಹೋರಾಟಕ್ಕೆ ಸಿಕ್ಕ ವಿಜಯವೂ ಆಗಿದೆ.
Next Story