ಪೈಶಾಚಿಕ ಕೃತ್ಯ!
ಮಾನ್ಯರೇ,
ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ 9 ವರ್ಷದ ಬಾಲಕಿಯೊಬ್ಬಳನ್ನು ಸಾಮೂಹಿಕ ಆತ್ಯಾಚಾರ ನಡೆಸಿ ಭೀಕರವಾಗಿ ಹತೈಗೈಯಲಾಗಿದೆ. ಬಾಲಕಿಯ ಮಲತಾಯಿಯೇ ಮುಂದೆ ನಿಂತು ತನ್ನ ಮಕ್ಕಳು ಹಾಗೂ ಅವರ ಸ್ನೇಹಿತರಿಂದ ಈ ಕೃತ್ಯ ಮಾಡಿಸಿದ್ದಾಳೆನ್ನುವುದು ನಿಜಕ್ಕೂ ನಾಗರಿಕ ಸಮಾಜ ಊಹೆ ಮಾಡಿಕೊಳ್ಳಲಾಗದ ರೀತಿಯ ಅಪರಾಧ.
ಕಾನೂನಿಂದ ಮಾತ್ರ ಆತ್ಯಾಚಾರ ತಡೆಯಲು ಸಾಧ್ಯವಿಲ್ಲ. ಕಠಿಣ ಕಾನೂನು ಹಾಗೂ ಸಾಮಾಜಿಕ ಜಾಗೃತಿಯ ಮೂಲಕ ಗಂಡುಮಕ್ಕಳಲ್ಲಿ ಅರಿವು ಮೂಡಿಸಿದರೆ ಮಾತ್ರ ಆತ್ಯಾಚಾರ ಪ್ರಕರಣಗಳು ಕಡಿಮೆಯಾದೀತು
Next Story