ಮಲ್ಯ ಎಂಬ ಮದಗಜಕ್ಕೆ ಲಗಾಮು ಹಾಕಿ
ಮಾನ್ಯರೆ, ನಮ್ಮದು ವೈವಿಧ್ಯಮಯವಾದ ರಾಷ್ಟ್ರ ಎಂಬುದೇನೋ ಸತ್ಯ. ಆದರೆ, ಆ ವೈವಿಧ್ಯತೆಯಲ್ಲಿಯೂ ತನ್ನ ತನವನ್ನು ಉಳಿಸಿಕೊಂಡು ಬಂದಿದೆ. ಆದುದರಿಂದಲೇ ಜಗತ್ತಿನ ಗಮನ ಸೆಳೆದಿದೆ. ಇದೆಲ್ಲ ಒಂದು ಕಡೆ ಆದರೆ, ನಮ್ಮದೇ ರಾಷ್ಟ್ರದಲ್ಲಿರುವ ಮಲ್ಯರಂತಹ ಮದಗಜಗಳು ವಿಶಿಷ್ಟವಾಗಿ ಜಗತ್ತಿನ ಗಮನ ಸೆಳೆದು ಬ್ಯಾಂಕ್ ಅಧಿಕಾರಿಗಳ ನಿದ್ದೆಗೆಡಿಸಿವೆ. ನಮ್ಮ ದೇಶದ ಬ್ಯಾಂಕೊಂದರಿಂದ ಸಾಮಾನ್ಯ ಪ್ರಜೆಯೊಬ್ಬ ಸಾಲ ಪಡೆಯಬೇಕಾದರೆ ತುಂಬಾ ಕಷ್ಟದ ಕೆಲಸ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ, ಮಲ್ಯ ಎಂಬ ಮದಗಜ ತೃಪ್ತಿಯಾಗುವಷ್ಟು ಸಾಲ ಪಡೆದು ಅದನ್ನು ಮರಳಿಸೊ ವಿಚಾರ ಬಂದಾಗ, ಅರ್ಧದಷ್ಟು ಸಾಲವನ್ನು ಮನ್ನಾಮಾಡಿ ಎಂಬ ತಗಾದೆ ತೆಗೆದಿದ್ದಾನೆ. ಇಂತಹವರ ವಿರುದ್ಧ ನಮ್ಮ ಆಡಳಿತ ವ್ಯವಸ್ಥೆ ಆದಷ್ಟು ಬೇಗ ಕ್ರಮಕೈಗೊಂಡು ಆಡಳಿತ ವ್ಯವಸ್ಥೆ ಮೇಲಿನ ಗೌರವವನ್ನು ಉಳಿಸಿಕೊಳ್ಳಲಿ .
Next Story