ಸಿಡಿಲಿಗೆ ಇನ್ನೆಷ್ಟು ಜೀವಗಳ ಆಹುತಿ?
ಮಾನ್ಯರೆ,
ಮಳೆಗಾಲ ಆರಂಭದ ಸಮಯದಲ್ಲಿ ಪ್ರತೀ ವರ್ಷ ಹಲವಾರು ಜೀವಗಳು ಸಿಡಿಲಿನ ಆಘಾತಕ್ಕೆ ಬಲಿಯಾಗುವುದಲ್ಲದೆ ಹಲವರು ಮನೆ ಸಮೇತ ಸೊತ್ತು, ವಿತ್ತಗಳನ್ನು ಕಳೆದುಕೊಳ್ಳುವುದನ್ನು ರಾಜ್ಯದಾದ್ಯಂತ ಕಾಣುತ್ತಿದ್ದೇವೆ.
ಈಗಿನ ತಂತ್ರಜ್ಞಾನದ ಕಾಲಘಟ್ಟದಲ್ಲಿ ಎಂತಹ ಸಮಸ್ಯೆಗಳಿಗೂ ಪರಿಹಾರವಿದೆ. ಆದರೆ ಈ ಸಿಡಿಲಿನ ಆಘಾತದ ಸಮಸ್ಯೆಗೆ ಶಾಶ್ವತವಾದ ಪರಿಹಾರವೇ ದೊರಕುತ್ತಿಲ್ಲ.
ಮಿಂಚುಸೆಳೆತದಂತಹ ತಂತ್ರಜ್ಞಾನಗಳು ಸಿಡಿಲಪ್ಪಳಿಸುವಿಕೆಯನ್ನು ತಡೆಯುತ್ತದೆ ಎಂಬ ಪ್ರತೀತಿ ಇದೆ. ಇದು ನಿಜವೇ ಆದರೆ ಸರಕಾರ ಈ ಬಗ್ಗೆ ಒಂದಷ್ಟು ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಇಂತಹ ಉಪಕರಣಗಳನ್ನು ಸರಕಾರಿ ಸಬ್ಸಿಡಿಗಳ ಮೂಲಕ ಜನರಿಗೆ ವಿತರಿಸಬಹುದಲ್ಲವೇ?
ಈಗ ಶೌಚಾಲಯದ ಬಗ್ಗೆ ಜಾಗೃತಿಯುಂಟಾಗಿ ಜನರು ಶೌಚಾಲಯ ಕಟ್ಟಿಕೊಳ್ಳುತ್ತಿದ್ದಾರೆ. ಹಾಗೆಯೇ ಸಿಡಿಲಿನ ಆಘಾತ ತಡೆಯುವಲ್ಲಿಯೂ ಸರಕಾರ ಪ್ರಯತ್ನಿಸಿದರೆ ಪ್ರತೀ ಮಳೆಗಾಲದಲ್ಲೂ ಒಂದಷ್ಟು ಜೀವಗಳನ್ನು ಕಳೆದುಕೊಳ್ಳವ ಪ್ರಮೇಯವೇ ಬರಲಾರದು.
Next Story