ಹುಡುಗರ ಭವಿಷ್ಯ ಏನಾಗಬಹುದು?
ಮಾನ್ಯರೆ,
ಚಾಮರಾಜನಗರದಲ್ಲಿ ಸಾಬರಿಗೆ ಬುದ್ಧಿ ಕಲಿಸುತ್ತೇವೆಂದು ಅಲ್ಲಿಯ ದೇವಸ್ಥಾನದ ಧ್ವಜವೊಂದಕ್ಕೆ ಹಿಂದೂ ಕೋಮಿನ ಮೂವರು ಹುಡುಗರು ಬೆಂಕಿ ಹಚ್ಚಿದ್ದರಂತೆ, ಈಗ ಆ ಯುವಕರು ಫೊಲೀಸರ ಅತಿಥಿಗಳಾಗಿದ್ದಾರೆ. ಆ ಹುಡುಗರ ಪೋಷಕರು, ಮಕ್ಕಳು ಇಂತಹ ಕಾರಣಗಳಿಂದ ಜೈಲಿಗೆ ಹೋದರೆ ಅನುಭವಿಸುವ ನೋವೆಷ್ಟು? ಪೋಷಕರು ಸಮಾಜದಲ್ಲಿ ಎದುರಿಸಬೇಕಾದ ಸಮಸ್ಯೆಗಳೆಷ್ಟು? ಈ ಹುಡುಗರಿಗೆ ಮದುವೆಯಾಗಲು ಹೆಣ್ಣು ಕೊಡಲು ಮುಂದೆ ಬರುವರಾರು? ವಿದ್ಯಾಭ್ಯಾಸ ಮುಗಿಸಿ ನೌಕರಿಯೊಂದು ಹಿಡಿದು ಜೀವನ ಸಾಗಿಸುವುದೇ ಕಷ್ಟವೆನಿಸಿರುವಾಗ ಈ ಹುಡುಗರ ಭವಿಷ್ಯ ಏನಾಗಬಹುದು?
ನೀವು ಮತ್ತು ನಿಮ್ಮ ಕುಟುಂಬ ಯಾತನೆ ಅನುಭವಿಸುವಾಗ, ನಿಮ್ಮನ್ನು ಈ ಕೆಲಸ ಮಾಡಲು ಪ್ರಚೋದಿಸುವವರಾರೂ ನೆರವಿಗೆ ಬರುವುದಿಲ್ಲ. ಬದುಕು ಕಟ್ಟಿಕೊಳ್ಳಿ, ಬಲಿಯಾಗಬೇಡಿ. ಆ ಹುಡುಗರು ಧ್ವಜ ಸುಟ್ಟಿದ್ದಕ್ಕಾಗಿ ಹೇಳಿಕೊಳ್ಳಲಾಗದ ಸಂಕಟ ಅನುಭವಿಸುವ ಮನಸ್ಸುಗಳು ದ್ವಂದ್ವ ಹೇಳಿಕೆ ನೀಡದಿದ್ದರೆ ಸಾಕು. ಖಂಡಿಸಿ ಹೇಳಿಕೆ ನೀಡುವರೇ ಕಾದು ನೋಡಬೇಕು.
Next Story