ಹೊಂಡಗಳನ್ನು ಮುಚ್ಚಿಸಿ
ಮಾನ್ಯರೆ,
ದಾವಣಗೆರೆ ನಗರದ ಹೆಚ್ಚಿನ ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿವೆ. ಉದಾಹರಣೆಗೆ ನಗರದ ಕೆ. ಆರ್. ರಸ್ತೆ, ಸಿ. ಜಿ. ಹಾಸ್ಪಿಟಲ್ ರಸ್ತೆ ಮುಂತಾದವುಗಳು ತೀರಾ ಹದಗೆಟ್ಟಿವೆ. ಮಳೆ ಬಂದರೆ ಇಂತಹ ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿಕೊಂಡು, ವಾಹನ ಚಾಲಕರಿಗೆ ಆ ಗುಂಡಿಗಳು ಕಾಣದಂತಾಗಿ, ಅಪಘಾತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ.ಇಂತಹ ಗುಂಡಿಗಳನ್ನು ಇಲ್ಲಿನ ರಸ್ತೆಯ ಕಾಮಗಾರಿ ನಿರ್ವಹಿಸುವವರು ಮಣ್ಣಿನಿಂದ ಮುಚ್ಚುತ್ತಿದ್ದಾರೆ. ಇದು ಕೆಲ ದಿನಗಳು ಮಾತ್ರ ಇದ್ದು ನಂತರ ಮತ್ತೆ ಹೊಂಡಗಳು ಬಾಯ್ದೆರೆದುಕೊಳ್ಳುತ್ತವೆ. ಈ ಬಾರಿ ವರುಣನ ಅರ್ಭಟ ಜೋರಾಗಿದ್ದು, ರಸ್ತೆಗೆ ಹಾಕಿದ ಮಣ್ಣು ನೀರಿನಲ್ಲಿ ಕರಗಿ ಅಪಾಯಕ್ಕೆ ದಾರಿಯಾಗುತ್ತಿದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಇಂತಹ ರಸ್ತೆಗಳನ್ನು ಕೂಡಲೇ ಡಾಮರೀಕರಣ ಮಾಡಿಸಿ, ವಾಹನಚಾಲಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.
Next Story