ಕಿಂಗ್ ಮೇಕರ್ ಕನಸು ಕಂಡಿದ್ದ ಬದ್ರುದ್ದೀನ್ ಅಜ್ಮಲ್ ಗೇ ಸೋಲು
ಪಕ್ಷಕ್ಕೂ ಭಾರೀ ಹಿನ್ನಡೆ
ದಿಸ್ಪುರ್ , ಮೇ 19 : ಅ ಐ ಯು ಡಿ ಎಫ್ ಅಧ್ಯಕ್ಷ ಹಾಗು ಸುಗಂಧ ದ್ರವ್ಯ ದೊರೆ ಬದ್ರುದ್ದೀನ್ ಅಜ್ಮಲ್ ಸೌಥ್ ಸಲ್ಮಾರ ಕ್ಷೇತ್ರದಿಂದ ಸೋಲುವ ಮೂಲಕ ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 18 ಸ್ಥಾನ ಗಳಿಸಿ ಪ್ರಧಾನ ವಿಪಕ್ಷವಾಗಿದ್ದ ಅಜ್ಮಲ್ ಅವರ ಪಕ್ಷ ಈಗ ಕೇವಲ 13 ಸ್ಥಾನಗಳನ್ನು ಪಡೆದಿದೆ. ಅದರಲ್ಲೂ ಪಕ್ಷದ ಅಧ್ಯಕ್ಷರೇ ಸೋತಿದ್ದಾರೆ.
" ಬಿಜೆಪಿಯನ್ನು ಅಭಿನಂದಿಸುತ್ತೇನೆ . ನಮ್ಮ ಸೋಲಿಗೆ ಕಾಂಗ್ರೆಸ್ ಪಕ್ಷ ಕಾರಣ " ಎಂದು ಬದ್ರುದ್ದೀನ್ ಹೇಳಿದ್ದಾರೆ.
ಈ ಬಾರಿ ತ್ರಿಶಂಕು ವಿಧಾನ ಸಭೆ ಸೃಷ್ಟಿಯಾಗಿ ತಾನು ಕಿಂಗ್ ಮೇಕರ್ ಆಗುತ್ತೇನೆ ಎಂಬ ವಿಶ್ವಾಸದಲ್ಲಿದ್ದ ಬದ್ರುದ್ದೀನ್ ಅವರಿಗೆ ಈ ಸೋಲು ಆಘಾತ ತಂದಿದೆ. ಸ್ವತ: ಅವರು ಸೋಲುತ್ತಾರೆ ಎಂದು ಅವರು ನಿರೀಕ್ಷಿಸಿರಲಿಲ್ಲ.
ಚುನಾವಣೆ ಮುಗಿದ ಮೇಲೆ ಅಗತ್ಯ ಬಿದ್ದರೆ ಬಿಜೆಪಿ ಜೊತೆ ಮೈತ್ರಿ ಮಾಡುವ ಸಾಧ್ಯತೆ ಇದೆ ಎಂಬರ್ಥ ಬರುವಂತೆ ಅವರು ಮಾತನಾಡಿದ್ದರು. ಆದರೆ ಈಗ ಅವರು ಹೀನಾಯ ಸೋಲು ಅನುಭವಿಸಿದ್ದಾರೆ.
Next Story